Friday, April 1, 2011

ಈ ಭಾನುವಾರ ಸಂಜೆ ವೀಣಾ ಶಾಂತೇಶ್ವರರನ್ನು ಭೇಟಿಯಾಗಿ




ವರ್ಲ್ಡ್‌‌ಕಪ್‌ ಮುಗಿದ ಮಾರನೇ ದಿನ . ನಿಮ್ಮ ಖಾಲಿ ಭಾನುವಾರವನ್ನು ತುಂಬಿಸಿಕೊಳ್ಳಲು ಒಳ್ಳೆಯ ಅವಕಾಶ. ಸಂಜೆ ೫.೩೦ಕ್ಕೆ ಸಾಹಿತ್ಯಪರಿಷತ್‌ ಕಡೆ ಬಂದರೆ ಅಪರೂಪಕ್ಕೆ ಬೆಂಗಳೂರಿನ ಕಡೆ ತಲೆಹಾಕುವ ಹಿರಿಯ ಕತೆಗಾರ್ತಿ ವೀಣಾಶಾಂತೇಶ್ವರರನ್ನು ನೋಡಬಹುದು. ನೋಡಿ... ಯೋಚನೆ ಮಾಡಿ!

Tuesday, March 29, 2011

‘ಗರಿಗರಿ’ ಕವಿತೆಗಳು!



ಪ್ರೀತಿಯ ಕವಿ ಎಚ್‌ಎಸ್‌ವಿಯವರ ಹೊಸ ಕವಿತೆಗಳು ಅಚ್ಚಿಗೆ ರೆಡಿಯಾಗಿವೆ. ಮುಖಪುಟ ಇಲ್ಲಿದೆ. ಕವಿಯ ಭಾವಚಿತ್ರ: ಎ ಎನ್‌ ಮುಕುಂದ್. ಚಿತ್ರದ ಮೇಲೆ ಕ್ಲಿಕ್‌ ಮಾಡಿ ದೊಡ್ಡದು ಮಾಡಿಕೊಂಡು ನೋಡಿ ಚೆನ್ನಾಗಿದೆ ಅಂತ ಹೇಳಿ ಆಯ್ತಾ?!!!

Sunday, March 27, 2011

ಶಾಮಣ್ಣ ಮತ್ತು ಶಾಮಣ್ಣ!



ಕುಂವೀ ಅವರ ಶಾಮಣ್ಣ(ಮತ್ತೆ ಕುಳಿತು ಹೇಳಿದ ಕತೆ) ಹಾಗೂ ಕಡಿದಾಳು ಶಾಮಣ್ಣನವರ ಆತ್ಮಕತೆ(ನಿರೂಪಣೆ: ಅಕ್ಷತಾ). ಇಬ್ಬರು ಶಾಮಣ್ಣರ ಪುಸ್ತಕಗಳಿಗೂ ಒಟ್ಟೊಟ್ಟಿಗೇ ಮುಖಪುಟ ಮಾಡಬೇಕಾಯಿತು. ನಿಮಗಾಗಿ ಇಲ್ಲಿವೆ. ಕುಂವೀ ಶಾಮಣ್ಣದ ಫೋಟೊ ಗೋಕರ್ಣದಲ್ಲಿ ತೆಗೆದದ್ದು.

Thursday, March 17, 2011

ಐದು ಕವನಗಳು


ರಾಮಚಂದ್ರದೇವ ಅವರ ಈ ಪುಸ್ತಕದ ಮುಖಪುಟ ಹೇಗಿದೆ ಹೇಳಿ. ಇದರೊಂದಿಗೆ ಇನ್ನೂ ನಾಲ್ಕು ಪುಸ್ತಕಗಳು ಈ ಭಾನುವಾರ(೨೦ಮಾರ್ಚಿ) ಬಿಡುಗಡೆಯಾಗುತ್ತಿವೆ. ಬಸವನಗುಡಿಯ ವರ್ಲ್ಡ್‌ ಕಲ್ಚರ್‌ ಸಂಸ್ಥೆ ಸಭಾಂಗಣದಲ್ಲಿ. ಬನ್ನಿ.

Monday, February 14, 2011

ಒಲವೆ ಮರೆಯದ ಮಮಕಾರ

ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ

Wednesday, January 5, 2011

ಬಿಸಿ ಬಿಸಿ ಕಾದಂಬರಿ!



ಜೋಗಿಯವರ ಹೊಸ ಕಾದಂಬರಿ ಬರುತ್ತಿದೆ. ಹೆಸರು: ಮಾಯಾಕಿನ್ನರಿ. ಬಿಡುಗಡೆ ಈ ಭಾನುವಾರ. ಮುಖಪುಟ ಇವತ್ತು ರೆಡಿಯಾಯಿತು. ಮುಖಪುಟ ರೆಡಿಯಾದ ನೆಮ್ಮದಿಯಲ್ಲಿ ಈಗ ಜೋಗಿ ಕಾದಂಬರಿ ಬರೆಯಲು ಕೂತಿದ್ದಾರೆ! ಬಿಸಿಬಿಸಿ ಕಾದಂಬರಿಯ ಜತೆಗೆ ಅವರ ಇನ್ನೆರಡು ಪುಸ್ತಕಗಳೂ ಅಂದು ಪ್ರಕಟಗೊಳ್ಳುತ್ತಿವೆ. ಪ್ರಕಾಶಕರು ಅಂಕಿತ. ಅಂದಮೇಲೆ ವಾಡಿಯಾ... ಬೆಳಗ್ಗೆ ೧೦.೩೦...ಇತ್ಯಾದಿ ವಿವರ ನಿಮಗೆ ಗೊತ್ತೇ ಇದೆ ಬಿಡಿ!