Thursday, January 28, 2010

ಪ್ರೀತಿಯ ಪರಿಸರ



ಪರಿಸರ ಪ್ರೀತಿಯಷ್ಟೇ ಅಲ್ಲ, ನಾಗೇಶ ಹೆಗಡೆಯವರ ಜತೆ ಎಂದರೆ ಅದು ಪ್ರೀತಿಯ ಪರಿಸರ.
ಅವರ ಆರು ಪುಸ್ತಕಗಳು ಬಿಡುಗಡೆಯಾಗುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಈ ಭಾನುವಾರ ಬಸವನಗುಡಿಗೆ ಬನ್ನಿ.
ಬೆಳಗ್ಗೆ ೧೦.೩೦ಕ್ಕೆ. ವರ್ಲ್ಡ್‌ ಕಲ್ಚರ್‌ ಇನ್ಸ್‌ಟಿಟ್ಯೂಟ್‌.
ಆರರಲ್ಲಿ ನಾಲ್ಲಕ್ಕೆ ನಾನು ಮುಖಪುಟ ಮಾಡಿದ್ದೇನೆ. ‘ಇರುವುದೊಂದೇ ಭೂಮಿ’ ಮತ್ತು ‘ಪ್ತತಿದಿನ ಪರಿಸರ ದಿನ’ ಪುಸ್ತಕಗಳಿಗೆ ಮಾಡಿದ ಮುಖಪುಟಗಳನ್ನು ಈ ಮೊದಲೇ ಬ್ಲಾಗ್‌ನಲ್ಲಿ ಹಾಕಿದ್ದೆ. ಹಾಗಾಗಿ ಉಳಿದೆರಡು ಮುಖಪುಟಗಳು ಮಾತ್ರ ಇಲ್ಲಿವೆ. (ಅಂಧಯುಗ ಪುಸ್ತಕದ ಮುಖಪುಟದಲ್ಲಿರುವ ರೇಖಾಚಿತ್ರ: ನಾಗೇಶ್‌ಹೆಗಡೆ)

Thursday, January 21, 2010

ಮೀರಾ ಬರೆದ ಎರಡು ಪುಸ್ತಕಗಳು

ಎಲ್‌ ಜಿ ಮೀರಾ ಅವರ ಕಥಾಸಂಕಲನ ಮತ್ತು ಶಾಲಾಮಕ್ಕಳಿಗೆ ಅವರು ಬರೆದ ನಾಟಕಗಳ ಪುಸ್ತಕ ಈ ಭಾನುವಾರ ಬಿಡುಗಡೆಯಾಗುತ್ತಿವೆ. ವಿಜಯನಗರ ೨ನೇ ಹಂತದ ಹಂಪಿನಗರ ಗ್ರಂಥಾಲಯದ ಸಭಾಂಗಣದಲ್ಲಿ ಈ ಕಾರ್ಯಕ್ರಮ. ಪುಸ್ತಕಬಿಡುಗಡೆಯ ಜತೆಗೆ ಪುಟ್ಟ ಮಕ್ಕಳ ನಾಟಕ, ನೃತ್ಯವನ್ನೂ ಸವಿಯಬಹುದು. ಬನ್ನಿ. ಸಮಯ: ಬೆಳಗ್ಗೆ ೧೦.೩೦.

Wednesday, January 20, 2010

ಸುಮ್ಮನೆ ಪದ್ಯ

ರಾತ್ರಿ ನಿನ್ನ ಕಿಟಕಿಯಾಗಸದಿ
ಜಾರುತಿದ್ದುದು ಚುಕ್ಕಿಯಲ್ಲ
ಈ ನನ್ನ ಮನವೆಂಬ ಹಕ್ಕಿ

ಆಧಾರವಿಲ್ಲದೆ ಬೀಳುತ್ತಿದ್ದುದು
ನಿನ್ನ ಕಂಗಳಲಿ ಅರೆಕ್ಷಣ ನಿಂತಿತಲ್ಲ
ಅಷ್ಟು ಸಾಕು ನಾನು ಲಕ್ಕಿ

Tuesday, January 19, 2010

ಸುನಂದಾ ಪದ್ಯಗಳು

ನನ್ನ ಫೇವರೆಟ್‌ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ ಬರೆದ ಹೊಸ ಪದ್ಯಗಳು ಪುಸ್ತಕ ರೂಪದಲ್ಲಿ ಬರುತ್ತಿವೆ. ಇದೇ ತಿಂಗಳ ೨೬ನೇ ತಾರೀಖು ಅಂಕೋಲೆ ಬಳಿಯ ನೌಕಾನೆಲೆ ಪರಿಸರದಲ್ಲೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಅಲ್ಲಿ ‘ಸೀಳುದಾರಿ’ ಎಂಬ ಹೆಸರಿನ ಈ ಪುಸ್ತಕದ ಬಿಡುಗಡೆ. ಬರುವಿರಾ? ಪುಸ್ತಕಕ್ಕೆ ನಾನು ರಚಿಸಿದ ಮುಖಪುಟ ಇಲ್ಲಿದೆ.


Sunday, January 17, 2010

ವಿಜೇತನ ಹೆಸರು ವಿನಯ ಕುಮಾರ ಸಾಯ

ಮಂಗಳೂರಿನ ಯುವಕ ವಿನಯ ಕುಮಾರ ಸಾಯ ರಚಿಸಿದ ಮುಖಪುಟ ಈ ಸಲದ ಛಂದ ವಿನ್ಯಾಸ ಬಹುಮಾನ ಗಳಿಸಿದೆ. ಅಂತಿಮ ಸುತ್ತಿನಲ್ಲಿದ್ದ ಮೂವತ್ತು ಮುಖಪುಟಗಳ ಪಟ್ಟಿಯನ್ನು ಮೂರಕ್ಕಿಳಿಸಿದಾಗ ಬಹುಮಾನ ಪಡೆದ ಈ ಮುಖಪುಟದೊಂದಿಗೆ ಕಣದಲ್ಲಿ ಇನ್ನೆರಡು ಮುಖಪುಟಗಳು ಉಳಿದಿದ್ದವು. ಅವು ಕಾಶಿ ಸುಬ್ರಮಣ್ಯ(25) ಮತ್ತು ರಾಮಕೃಷ್ಣ ಸಿದ್ರಪಾಲ(27) ಅವರದು. ಬಹುಮಾನಕ್ಕೆ ಮುಖಪುಟವನ್ನು ಆರಿಸಿಕೊಟ್ಟ ಜಯಂತಕಾಯ್ಕಿಣಿ ಅವರಿಗೆ ಕೃತಜ್ಞತೆಗಳು.
ಇಪ್ಪತ್ತೈದು ವರ್ಷದ ವಿನಯಕುಮಾರ ದಾವಣಗೆರೆಯ ಲಲಿತ ಕಲಾ
ಮಹಾವಿದ್ಯಾಲಯದಲ್ಲಿ ಓದಿ ವಿಷುಯಲ್‌ ಆರ್ಟ್ಸ್‌ ಪದವಿ ಪಡೆದಿದ್ದಾರೆ. ಈಗ ಮಂಗಳೂರಿನ ‘ಆರೆಂಜ್‌ ಆಂಗಲ್‌ ಸಂಸ್ಥೆಯಲ್ಲಿ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸಮಾಡುತ್ತಿದ್ದಾರೆ. ಹಲವು ಪ್ರಮುಖ ಪತ್ರಿಕೆಗಳಲ್ಲಿ ಕತೆ-ಕವನ-ಮಕ್ಕಳ ಪದ್ಯಗಳನ್ನು ಪ್ರಕಟಿಸಿರುವ ವಿನಯ್ ಅವರಿಗೆ ಜಾಹೀರಾತು ಕಲೆಯಲ್ಲಿ ಆಸಕ್ತಿ. ಕೆಲ ಪುಸ್ತಕಗಳಿಗೆ ಮುಖಪುಟ ರಚಿಸಿದ್ದಾರೆ. ಏಡ್ಸ್‌ ಜಾಗೃತಿ ಸಂದೇಶದ ಅವರ ಭಿತ್ತಿಚಿತ್ರವೊಂದಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿತ್ತು. ಪ್ರಸ್ತುತ ಸ್ಪರ್ಧೆಯ ಅಂತಿಮ ಮೂವತ್ತರಲ್ಲಿ ಅವರ 6 ಪ್ರವೇಶಗಳಿದ್ದವು.
ಅಂತಿಮ ೩೦ರ ಪಟ್ಟಿಯಲ್ಲಿದ್ದ ಎಲ್ಲ ಮುಖಪುಟಗಳೂ
ಸೊಗಸಾಗಿದ್ದವು. ಆ ಕಲಾವಿದರುಗಳ ಹೆಸರುಗಳು ಇಂತಿವೆ.(ಆವರಣದಲ್ಲಿ ಅವರ ಮುಖಪುಟ ಸಂಖ್ಯೆ ಇದೆ). ರವಿಕುಮಾರ ಅಬ್ಬಿಗೇರಿ(1, 2), ವಿನಯಕುಮಾರ ಸಾಯ(3, 5, 7,15,16, 22), ಕಾಶಿ ಸುಬ್ರಮಣ್ಯ(4, 25), ಸೌಮ್ಯ ಕಲ್ಯಾಣ್‌ಕರ‍್(6,8, 14, 21, 30), ಮಂಜುನಾಥ್ ಲತಾ(9, 10, 28) ಪ್ರಮೋದ್‌ ಪಿ ಟಿ (11), ವಿನಿಶಾ ತೀರ್ಥಹಳ್ಳಿ(12), ನೀಲಾಂಜಲ(13), ನಯನಾ ಜೋಶಿ(17, 26), ಸುಧನ್ವಾ ದೇರಾಜೆ(18), ನಿಹಾರಿಕಾ ಶೆಣೈ(19), ಇಂದು ಹರಿಕುಮಾರ‍್(20), ಶ್ರೀನಿಧಿ ಟಿಜಿ(23), ಅಜಿತ್‌ ಕೌಂಡಿನ್ಯ(24), ರಾಮಕೃಷ್ಣ ಸಿದ್ರಪಾಲ(27), ಸುನಿಲ್‌ ಕುಲಕರ್ಣಿ(29)
ಸರಿ ಉತ್ತರ ಸಂಖ್ಯೆ 3 ಎಂದು ಗುರುತಿಸಿ ಕಾಮೆಂಟ್‌ ಹಾಕಿದವರು ೮ ಜನ. ಸಾವಿರ ರೂ ಬಹುಮಾನವನ್ನು 2000 ರೂಗಳಿಗೆ ಹೆಚ್ಚಿಸಿ ಈ ಎಂಟೂ ಜನರಿಗೆ ತಲಾ 250 ರೂ ಮೌಲ್ಯದ ಪುಸ್ತಕಗಳನ್ನು ಛಂದಪುಸ್ತಕ ಮತ್ತು ಮೇಫ್ಲವರ್‌ ಮೀಡಿಯಾ ಹೌಸ್‌ ವತಿಯಿಂದ ನೀಡಲಾಗುವುದು. ಪುಸ್ತಕ ಬಿಡುಗಡೆಯ ದಿನ ಈ ಬಹುಮಾನ ವಿತರಣೆ ಇರುತ್ತದೆ. ಗೆದ್ದವರಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲರಿಗೂ, ಕಮೆಂಟು ಹಾಕಿದವರಿಗೂ ಛಂದಪುಸ್ತಕ ಕೃತಜ್ಞತೆ ಹೇಳುತ್ತದೆ. ಒಟ್ಟಾರೆ ಯಾವ ಮುಖಪುಟಕ್ಕೆ ಎಷ್ಟು ಓದುಗರ ಕಾಮೆಂಟುಗಳು ಬಂದವು ಎಂಬ ಕುತೂಹಲಕ್ಕೆ ಇಲ್ಲೊಂದು ಗ್ರಾಫ್‌ ತಯಾರಿಸಿದ್ದೇವೆ. ಕ್ಲಿಕ್‌ ಮಾಡಿ ನೋಡಿ.



Sunday, January 10, 2010

ಈಗ ನಿಮ್‌ ನಂಬರ್‌: ೧೦೦೦ರೂ ಗೆಲ್ಲಿರಿ!!

ನಮಗೆ ಬಂದ ೧೩೦ಕ್ಕೂ ಹೆಚ್ಚು ಮುಖಪುಟಗಳಲ್ಲಿ ಅಂತಿಮ ಸುತ್ತನ್ನು ತಲುಪಿದವು ಈ ಕೆಳಗಿನ ಮೂವತ್ತು. ಇವನ್ನು ಆರಿಸಿಕೊಟ್ಟವರು ಈ ಸಲದ ಛಂದಪುಸ್ತಕ ಮುಖಪುಟ ವಿನ್ಯಾಸ ಸ್ಪರ್ಧೆಯ ತೀರ್ಪುಗಾರರಾದ ಕತೆಗಾರ ಜಯಂತ ಕಾಯ್ಕಿಣಿ. ತಮ್ಮ ಅಪರೂಪದ ಕಲಾಪ್ರಜ್ಞೆಯಿಂದ ಕನ್ನಡಕ್ಕೇ ಹೊಸತೆನಿಸುವಂತೆ ಭಾವನಾದ ಪುಟಗಳನ್ನು ರೂಪಿಸಿದ ಜಯಂತ್‌ ತೀರ್ಪುಗಾರರಾಗಿರುವುದು ನಮಗೆ ಸಂತಸ.
ಈ ಮೂವತ್ತರಲ್ಲಿ ಒಂದನ್ನು ಜಯಂತ್‌ ಬಹುಮಾನಕ್ಕಾಗಿ ಆರಿಸಿಕೊಡಲಿದ್ದಾರೆ. ಅಷ್ಟರೊಳಗೆ ನಿಮಗೊಂದು ಆಕರ್ಷಕ ಸ್ಪರ್ಧೆಯೂ ಇದೆ. ಈ ಮುಖಪುಟಗಳಲ್ಲಿ ಯಾವುದಕ್ಕೆ ಬಹುಮಾನ ಸಿಗಬಹುದು ಎಂದು ಊಹಿಸಿ. ಛಂದಪುಸ್ತಕ ಮತ್ತು ಮೇಫ್ಲವರ್‌ ಮೀಡಿಯಾಹೌಸ್‌ ವತಿಯಿಂದ ೧೦೦೦ ರೂ ಮೌಲ್ಯದ ಬಹುಮಾನ ಗೆಲ್ಲಿರಿ.
ನಿಯಮಗಳು ಹೀಗಿವೆ: ನಿಮ್ಮ ಆಯ್ಕೆಯ ಮುಖಪುಟದ ಸಂಖ್ಯೆಯನ್ನು ನಿಮ್ಮ ಕಾಮೆಂಟ್‌ನಲ್ಲಿ ಸೂಚಿಸಿ. ಪ್ರತಿ ಮುಖಪುಟವನ್ನು ಅದರ ಬಲ ಮೇಲ್ತುದಿಯಲ್ಲಿರುವ ಸಂಖ್ಯೆಯಿಂದ ಗುರುತಿಸಬಹುದು. ಕಾಮೆಂಟ್‌ ಹಾಕುವಾಗ ನಿಮ್ಮ ಬ್ಲಾಗ್‌ ಐಡಿ ಬಳಸಿ. ಅಥವಾ ಬ್ಲಾಗ್‌ ಇಲ್ಲದಿದ್ದರೆ ಇಮೇಲ್‌ ಐಡಿ ಕೊಡಿ. ಒಬ್ಬರು ಒಂದೇ ಮುಖಪುಟ ಆಯ್ಕೆ ಮಾಡಲಿ ಎಂಬುದಕ್ಕಾಗಿ ಈ ನಿಯಮ. ನಿಮ್ಮ ಕಮೆಂಟ್‌ನಲ್ಲಿ ಒಂದು ಮುಖಪುಟವನ್ನು ಮಾತ್ರ ಸೂಚಿಸಿ. ಹೆಚ್ಚು ಮುಖಪುಟಗಳನ್ನು ಸೂಚಿಸಿದರೆ ಅನರ್ಹಗೊಳ್ಳುತ್ತೀರಿ ಎಂಬುದು ನೆನಪಿರಲಿ.
ಎಲ್ಲ ವಿಷಯಗಳಲ್ಲೂ ಛಂದಪುಸ್ತಕದ್ದೇ ಅಂತಿಮ ತೀರ್ಮಾನ. ಬರುವ ಶನಿವಾರದವರೆಗೆ ಮಾತ್ರ ಅವಕಾಶ. ಭಾನುವಾರ ಫಲಿತಾಂಶ ಪ್ರಕಟ. ಗುಡ್‌ಲಕ್‌!









































Wednesday, January 6, 2010

ಎಲ್ಲರಿಗೂ ಧನ್ಯವಾದಗಳು

ಛಂದ ಪುಸ್ತಕ ಮುಖಪುಟ ವಿನ್ಯಾಸ ಸ್ಪರ್ಧೆಯ ಮೊದಲ ಸುತ್ತು ಪೂರ್ಣಗೊಂಡಿದೆ. ಈ ಬಾರಿಯ ಸ್ಪರ್ಧೆಯ ವಿಶೇಷವೆಂದರೆ ೧೫ಕ್ಕೂ ಹೆಚ್ಚು ಹುಡುಗಿಯರು ಪಾಲ್ಗೊಂಡಿರುವುದು!(ಬಾಲಕಿಯರದೇ ಮೇಲುಗೈ!).
ನಿನ್ನೆ ರಾತ್ರಿಯವರೆಗೆ ಬಂದ ಮುಖಪುಟಗಳನ್ನು ಈ ಕೆಳಗೆ ನೋಡಬಹುದು. ಬಂದ ಮುಖಪುಟಗಳಲ್ಲಿ ಶೇಕಡಾ ೯೫ ರಷ್ಟನ್ನು ಈ ಬ್ಲಾಗ್‌ನಲ್ಲಿ ಪ್ರಕಟಿಸಲಾಗಿದೆ. ಒಂದೇ ವಿನ್ಯಾಸದ ಎರಡು ಬಣ್ಣದ ಆವೃತ್ತಿಗಳಿದ್ದಾಗ, ಅಥವಾ ತೀರಾ ಸರಿಹೊಂದುತ್ತಿಲ್ಲ ಅನಿಸಿದಾಗ ಅಂಥ ಸುಮಾರು ೧೦-೧೫ ಮುಖಪುಟಗಳನ್ನು ಮಾತ್ರ ಕೈ ಬಿಡಲಾಗಿದೆ. ಆದರೆ ಅವೂ ಸೇರಿದಂತೆ ನಮಗೆ ಬಂದ ಎಲ್ಲ ವಿನ್ಯಾಸಗಳನ್ನೂ ತೀರ್ಪುಗಾರರಿಗೆ ನೀಡಲಾಗುವುದು.
ನಂತರ ಫಲಿತಾಂಶ. ಕೆಲವು ದಿನ ಕಾಯಬೇಕಷ್ಟೆ. ಅಲ್ಲಿಯ ವರೆಗೆ ಇಲ್ಲಿರುವ ಒಟ್ಟು ೧೨೭ ವಿನ್ಯಾಸಗಳ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಮತ್ತು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಎಲ್ಲರಿಗೂ ಛಂದಪುಸ್ತಕದ ಕೃತಜ್ಞತೆಗಳು.