

ಅಹರ್ನಿಶಿ ಪ್ರಕಾಶನದಿಂದ ಮತ್ತೆರಡು ಪುಸ್ತಕ ಈ ಭಾನುವಾರ ಹೊರಬರುತ್ತಿವೆ. ಮತ್ತೆ ಮತ್ತೆ ಬೇಂದ್ರೆ ಎಂಬ ಮೊದಲ ಪುಸ್ತಕದಲ್ಲಿ ಬೇಂದ್ರೆ ಕುರಿತು ಕಿರಂ ಮಾಡಿದ ಹಲವು ಉಪನ್ಯಾಸಗಳಿವೆ. ಕಾವ್ಯಾಸಕ್ತರಿಗೆ ನಿಜಕ್ಕೂ ಇದೊಂದು ಉಡುಗೊರೆಯಂಥ ಪುಸ್ತಕ. ಹಲವರನ್ನು ಬೇಡಿ ಭಾಷಣದ ಆಡಿಯೋಗಳನ್ನು ಸಂಪಾದಿಸಿ, ಗಂಟೆಗಟ್ಟಲೆ ಕೂತು ಕೇಳಿ, ಹಿಂದೆ ಮುಂದೆ ಓಡಿಸಿ, ಹಾಳೆಗಿಳಿಸಿದ್ದಲ್ಲದೆ ಪುಸ್ತಕವನ್ನು ಪ್ರಕಾಶಿಸುತ್ತಿರುವ ಅಕ್ಷತಾಗೆ ಅಭಿನಂದನೆಗಿಂತ ಹೆಚ್ಚಾಗಿ ಧನ್ಯವಾದವನ್ನೇ ಹೇಳಬೇಕು.
ಎರಡನೇ ಪುಸ್ತಕ ನೀಷೆ ಕುರಿತದ್ದು. ಬಿಡುಗಡೆ ಕಾರ್ಯಕ್ರಮ ಶಿವಮೊಗ್ಗದಲ್ಲಿ.