

ಕಟ್ಟು ಕಥೆಗಳು ಪುಸ್ತಕದ ಮುಖಪುಟ ವಿನ್ಯಾಸ: ವಿನಯ ಕುಮಾರ ಸಾಯ.ಇನ್ನೆರಡು ನನ್ನವು. ಗುಣ ಮುಖಪುಟದ ಫೋಟೊ ಜೆನ್ನಿ ಸಾಲಿಸ್.
ಈ ಮೂರೂ ಪುಸ್ತಕಗಳು ಸೋಮವಾರದಿಂದ ಅಂಗಡಿಗಳಲ್ಲಿ ಸಿಗುತ್ತವೆ.
ಗೆಳೆಯ ಅರುಣ್ ಜೋಳದ ಕೂಡ್ಲಿಗಿಯ ಹೊಸ ಕವನಗಳ ಪುಸ್ತಕವಿದು. ಅಹರ್ನಿಶಿ ಮತ್ತು ಕೊಟ್ಟೂರಿನ ‘ನಾವು ನಮ್ಮಲ್ಲಿ’ ಬಳಗ ಕೂಡಿ ಹೊರತರುತ್ತಿರುವ ಈ ಹೊತ್ತಗೆಯ ಬಿಡುಗಡೆ ಮೈಸೂರಿನಲ್ಲಿ- ನಾಡಿದ್ದು ಶನಿವಾರ. ಸಂಜೆ ೬.೩೦ಕ್ಕೆ ಅಂಗನವಾಡಿ ಕಾರ್ಯಕರ್ತೆ ಕಲಾ ಇದನ್ನು ಬಿಡುಗಡೆ ಮಾಡಲಿದ್ದಾರೆ. ಬಂಜಗೆರೆ ಜಯಪ್ರಕಾಶ್ ಪುಸ್ತಕ ಕುರಿತು ಮಾತಾಡುತ್ತಾರೆ. ಮಂಜುನಾಥ್ ಲತಾ ಮತ್ತು ಉಷಾರಾಣಿ ಕೆಲವು ಪದ್ಯಗಳನ್ನು ಓದಲಿದ್ದಾರೆ.