Friday, April 18, 2008

ಸಫಾರಿ ಹಂತಕ

ನಾನೇನೂ ಹುಟ್ಟುತ್ತಲೇ ಹೀಗಿರಲಿಲ್ಲ
ಪರಿಸ್ಥಿತಿಯ ಒತ್ತಡಕೆ ಸಿಲುಕಿ ಹೀಗೆ
ಸಂಭಾವಿತನಾಗಿರುವೆ ಅಷ್ಟೆ

ತೀಟೆ ತಿನುವ ಕೈಗಳನು
ಅಡಗಿಸಿರುವೆ ಸಫಾರಿ ಜೇಬಿನಲಿ
ಬೇಟೆ ಹುಡುಕೋ ಕಣ್ಗಳನು
ಕಪ್ಪು ಕನ್ನಡಕದ ಮರೆಯಲಿ
ವಿಧಿ ಇಲ್ಲದೆ ಸುಮ್ಮನಿರುವೆ
ಕತ್ತಲಾಗಲೆಂದು ಕಾಯುತಿರುವೆ

ಹಣ್ಣು ಹಣ್ಣು ಮುದುಕನ ಕಣ್ಣು ಕೀಳಬಲ್ಲೆ
ಹಾಲು ಕುಡಿವ ಪಾಪುವ ರೇಪು ಮಾಡಬಲ್ಲೆ
ಎಂಥ ನಿರ್ಗತಿಕನನೂ ಮತ್ತೆ ದೋಚಬಲ್ಲೆ
ಜೀವದ ಗೆಳೆಯನ ಜೀವಕೂ ಕೈಯ ಚಾಚಬಲ್ಲೆ

ತಡೆಯುತಿರುವುದು ಸಿಕ್ಕಿ ಬೀಳುವ ಒಂದೇ ಭಯಕೆ
ಅದಕಾಗೇ ಧರಿಸಿರುವೆ ಸಂಭಾವಿತ ಹಗಲು ವೇಷ
ರಾತ್ರಿಯಾದರೆ ಹೆಡೆ ಎತ್ತುವವು ಹಾವಿನಂಥ ಬಯಕೆ
ಸುಪಾರಿ ಯಾಕೆ ಬೇಕು ನನ್ನ ಸ್ಥಾಯಿಭಾವ ದ್ವೇಷ

ಎಂಥ ನಿರ್ಜನ ರಾತ್ರಿ ತಾರೆಯೂ ಇಲ್ಲದ ಆಕಾಶ
ಒಬ್ಬಳೇ ನಿಂತಿರುವಳು ಸಿಕ್ಕೀತೆ ಇಂಥ ಅವಕಾಶ
ಎಲೆ ಹೆಣ್ಣೆ ಕಾಣುತಿರುವುದೆ ನನ್ನ ಕೈಯ ಚಾಕು
ಕೊಲೆಯೊ ರೇಪೊ ಹೇಳು ಮೊದಲು ಏನು ಬೇಕು?

ಓ ನಿನ್ನ ಕೈಲೂ ಉಂಟೆ ಗುಂಡು ತುಂಬಿದ ಗನ್ನು
ಹಾಗಾದರೆ ನಮ್ಮ ಪಾಡಿಗೆ ನಾವು ಹೋಗಬೇಕಿನ್ನು
ಮತ್ತೆ ಸಿಗೋಣ, ಒಬ್ಬರ ಬಳಿ ಮಾತ್ರ ಇದ್ದಾಗ ಬಾಕು
ಬರಲೆ? ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಹೋಗಬೇಕು

3 comments:

ShivaRam H said...

ಅಪಾರ ಅವರೇ,

ನಿಮ್ಮ ಈ ಕವನ ಅಪರಂಪಾರವೇ ಆಗಿದೆ.

ಚೆನ್ನಾಗಿ ಬರೆಯುತ್ತೀರಿ;

ನಿಮ್ಮ ಲಹರಿ ಸಾಗಲಿ

ಯಾರೆಲ್ಲರ ಮನಗಳು ಗರಿಗೆದರಲಿ

-ರೈಟರ್ ಶಿವರಾಂ

ನನ್ನಬ್ಲಾಗ್ ರೋಲ್ ಗೆ ಸೇರ್ಪಡೆ ಮಾಡಿರುವೆ ನೋಡಿ
http://ritertimes.com

Supreeth.K.S said...

ಮದ್ಯಸಾರದಿಂದ ನಮ್ಮನ್ನು ವಂಚಿತರನ್ನಾಗಿ ಮಾಡಿದ ನೋವನ್ನು ಮರೆಯುವುದಕ್ಕೆ ಈ ಕವನಗಳು ಸಹಕಾರಿಯಾಗಿವೆ. ಅಪಾರವಾಗಲಿ ನಿಮ್ಮ ಈ ಕೆಲಸ.

http://uniquesupri.wordpress.com/

Anonymous said...

Raghu, you are better poet can write much better than this. Bit disappointed.