Monday, November 29, 2010

ಆರು ಹೊಸ ನುಡಿ ಪುಸ್ತಕಗಳು- ಈ ಭಾನುವಾರ






ಡಿಸೆಂಬರ್‌ ೫ನೇ ತಾರೀಖು ಬೆಳಗ್ಗೆ ೧೦.೧೫ಕ್ಕೆ ಬಸವನಗುಡಿಯ ವರ್ಲ್ಡ್‌ ಕಲ್ಚರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ನುಡಿ ಪುಸ್ತಕ ಪ್ರಕಾಶನ ಸಂಸ್ಥೆಯ ಆರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಅದರಲ್ಲಿ ಕೆಲವು ಮುಖಪುಟಗಳು ಇಲ್ಲಿವೆ.

Tuesday, November 23, 2010

ಮತ್ತೆ ಮತ್ತೆ ಮುಖಪುಟಗಳು



ಅಹರ್ನಿಶಿ ಪ್ರಕಾಶನದಿಂದ ಮತ್ತೆರಡು ಪುಸ್ತಕ ಈ ಭಾನುವಾರ ಹೊರಬರುತ್ತಿವೆ. ಮತ್ತೆ ಮತ್ತೆ ಬೇಂದ್ರೆ ಎಂಬ ಮೊದಲ ಪುಸ್ತಕದಲ್ಲಿ ಬೇಂದ್ರೆ ಕುರಿತು ಕಿರಂ ಮಾಡಿದ ಹಲವು ಉಪನ್ಯಾಸಗಳಿವೆ. ಕಾವ್ಯಾಸಕ್ತರಿಗೆ ನಿಜಕ್ಕೂ ಇದೊಂದು ಉಡುಗೊರೆಯಂಥ ಪುಸ್ತಕ. ಹಲವರನ್ನು ಬೇಡಿ ಭಾಷಣದ ಆಡಿಯೋಗಳನ್ನು ಸಂಪಾದಿಸಿ, ಗಂಟೆಗಟ್ಟಲೆ ಕೂತು ಕೇಳಿ, ಹಿಂದೆ ಮುಂದೆ ಓಡಿಸಿ, ಹಾಳೆಗಿಳಿಸಿದ್ದಲ್ಲದೆ ಪುಸ್ತಕವನ್ನು ಪ್ರಕಾಶಿಸುತ್ತಿರುವ ಅಕ್ಷತಾಗೆ ಅಭಿನಂದನೆಗಿಂತ ಹೆಚ್ಚಾಗಿ ಧನ್ಯವಾದವನ್ನೇ ಹೇಳಬೇಕು.
ಎರಡನೇ ಪುಸ್ತಕ ನೀಷೆ ಕುರಿತದ್ದು. ಬಿಡುಗಡೆ ಕಾರ್ಯಕ್ರಮ ಶಿವಮೊಗ್ಗದಲ್ಲಿ.

Friday, November 19, 2010

ನರಿಗಳಿಗೇಕೆ ಕೋಡಿಲ್ಲ: ಒಂದು ನಾಟಕದ ಕರಪತ್ರ


‘ಸಂಚಾರಿ ಥಿಯೇಟ್ರು’ ತಂಡ ಈ ವಾರಾಂತ್ಯದಲ್ಲಿ ಅಭಿನಯಿಸಲಿರುವ ಕುವೆಂಪು ವಿರಚಿತ ನಾಟಕದ ಕರಪತ್ರದ ವಿನ್ಯಾಸ. ಎಲ್ಲಿ? ಎಷ್ಟು ಹೊತ್ತಿಗೆ? ಸಂಪೂರ್ಣ ವಿವರಗಳಿಗೆ ‘ಅವಧಿ’ ನೋಡಿ.