Thursday, July 29, 2010

ಮೂರು ಹೊಸ ಛಂದ ಪುಸ್ತಕಗಳು



ಕಟ್ಟು ಕಥೆಗಳು ಪುಸ್ತಕದ ಮುಖಪುಟ ವಿನ್ಯಾಸ: ವಿನಯ ಕುಮಾರ ಸಾಯ.
ಇನ್ನೆರಡು ನನ್ನವು. ಗುಣ ಮುಖಪುಟದ ಫೋಟೊ ಜೆನ್ನಿ ಸಾಲಿಸ್‌.
ಈ ಮೂರೂ ಪುಸ್ತಕಗಳು ಸೋಮವಾರದಿಂದ ಅಂಗಡಿಗಳಲ್ಲಿ ಸಿಗುತ್ತವೆ.

Tuesday, July 20, 2010

ಆತ್ಮಚರಿತ್ರೆಗಳ ಕಾಲ


ಕುಂವೀ ಆತ್ಮಕಥನ ಸಪ್ನದಿಂದ ಇನ್ನೆರಡು ವಾರಗಳಲ್ಲಿ ಬಿಡುಗಡೆಯಾಗಲಿದೆ. ತಾರಾನಾಥರ ಪುಸ್ತಕ ಬರುವ ಭಾನುವಾರವೇ ಅಂಕಿತಪುಸ್ತಕದಿಂದ ಹೊರಬರುತ್ತಿದೆ. ಪ್ರೇಮಾ ಕಾರಂತರ ಆತ್ಮಕತೆಯೂ ಸದ್ಯದಲ್ಲಿಯೇ ಹೊರಬರಲಿದೆ. ಅದರ ಮುಖಪುಟ ನೋಡಲು ಈ ಬ್ಲಾಗಿಗೆ ಮತ್ತೊಮ್ಮೆ ಬನ್ನಿ!

Thursday, July 8, 2010

ಅರುಣನ ಹೊಸ ಪದ್ಯಗಳು

ಗೆಳೆಯ ಅರುಣ್ ಜೋಳದ ಕೂಡ್ಲಿಗಿಯ ಹೊಸ ಕವನಗಳ ಪುಸ್ತಕವಿದು. ಅಹರ್ನಿಶಿ ಮತ್ತು ಕೊಟ್ಟೂರಿನ ‘ನಾವು ನಮ್ಮಲ್ಲಿ’ ಬಳಗ ಕೂಡಿ ಹೊರತರುತ್ತಿರುವ ಈ ಹೊತ್ತಗೆಯ ಬಿಡುಗಡೆ ಮೈಸೂರಿನಲ್ಲಿ- ನಾಡಿದ್ದು ಶನಿವಾರ. ಸಂಜೆ ೬.೩೦ಕ್ಕೆ ಅಂಗನವಾಡಿ ಕಾರ್ಯಕರ್ತೆ ಕಲಾ ಇದನ್ನು ಬಿಡುಗಡೆ ಮಾಡಲಿದ್ದಾರೆ. ಬಂಜಗೆರೆ ಜಯಪ್ರಕಾಶ್‌ ಪುಸ್ತಕ ಕುರಿತು ಮಾತಾಡುತ್ತಾರೆ. ಮಂಜುನಾಥ್ ಲತಾ ಮತ್ತು ಉಷಾರಾಣಿ ಕೆಲವು ಪದ್ಯಗಳನ್ನು ಓದಲಿದ್ದಾರೆ.
ಶನಿವಾರ ಮತ್ತು ಭಾನುವಾರ ನಡೆಯಲಿರುವ ‘ಕರ್ನಾಟಕದ ವರ್ತಮಾನ’ ಎಂಬ ಮುಕ್ತಸಂವಾದದ ಹಲವು ಕಾರ್ಯಕ್ರಮಗಳಲ್ಲಿ ಈ ಪುಸ್ತಕ ಬಿಡುಗಡೆ ಒಂದು. ಉಳಿದ ಕಾರ್ಯಕ್ರಮಗಳ ವಿವರಕ್ಕೆ ಅವಧಿ ನೋಡಿ. ಹಲವು ಆಸಕ್ತಿಕರ ಗೋಷ್ಠಿಗಳು ನಡೆಯುತ್ತಿವೆ.
ಅಂದಹಾಗೆ ಸ್ಥಳ: ವನರಂಗ(ರಂಗಾಯಣದ ಆವರಣ)