Thursday, July 8, 2010

ಅರುಣನ ಹೊಸ ಪದ್ಯಗಳು

ಗೆಳೆಯ ಅರುಣ್ ಜೋಳದ ಕೂಡ್ಲಿಗಿಯ ಹೊಸ ಕವನಗಳ ಪುಸ್ತಕವಿದು. ಅಹರ್ನಿಶಿ ಮತ್ತು ಕೊಟ್ಟೂರಿನ ‘ನಾವು ನಮ್ಮಲ್ಲಿ’ ಬಳಗ ಕೂಡಿ ಹೊರತರುತ್ತಿರುವ ಈ ಹೊತ್ತಗೆಯ ಬಿಡುಗಡೆ ಮೈಸೂರಿನಲ್ಲಿ- ನಾಡಿದ್ದು ಶನಿವಾರ. ಸಂಜೆ ೬.೩೦ಕ್ಕೆ ಅಂಗನವಾಡಿ ಕಾರ್ಯಕರ್ತೆ ಕಲಾ ಇದನ್ನು ಬಿಡುಗಡೆ ಮಾಡಲಿದ್ದಾರೆ. ಬಂಜಗೆರೆ ಜಯಪ್ರಕಾಶ್‌ ಪುಸ್ತಕ ಕುರಿತು ಮಾತಾಡುತ್ತಾರೆ. ಮಂಜುನಾಥ್ ಲತಾ ಮತ್ತು ಉಷಾರಾಣಿ ಕೆಲವು ಪದ್ಯಗಳನ್ನು ಓದಲಿದ್ದಾರೆ.
ಶನಿವಾರ ಮತ್ತು ಭಾನುವಾರ ನಡೆಯಲಿರುವ ‘ಕರ್ನಾಟಕದ ವರ್ತಮಾನ’ ಎಂಬ ಮುಕ್ತಸಂವಾದದ ಹಲವು ಕಾರ್ಯಕ್ರಮಗಳಲ್ಲಿ ಈ ಪುಸ್ತಕ ಬಿಡುಗಡೆ ಒಂದು. ಉಳಿದ ಕಾರ್ಯಕ್ರಮಗಳ ವಿವರಕ್ಕೆ ಅವಧಿ ನೋಡಿ. ಹಲವು ಆಸಕ್ತಿಕರ ಗೋಷ್ಠಿಗಳು ನಡೆಯುತ್ತಿವೆ.
ಅಂದಹಾಗೆ ಸ್ಥಳ: ವನರಂಗ(ರಂಗಾಯಣದ ಆವರಣ)

No comments: