Monday, November 26, 2007

ಹರೀಶ್ ಕೇರನ ಎರಡು ಕವಿತೆ

-೧-
ಅಪಾರ ದುಃಖದ ಕಡಲನ್ನು
ದಾಟಿಸಬಹುದು ಅಂತ
ಕವಿತೆಯ ನಂಬಿಕೊಂಡೆ


ಅದು ನನ್ನ ನಡುನೀರಿನಲ್ಲಿ ಕೈಬಿಟ್ಟಿದೆ
ಅಲೆಗಳೋ ಲಯತಪ್ಪಿವೆ
ನಾದದ ಹಡಗೊಂದು
ದೂರದಲ್ಲಿ ಹಾದುಹೋಗಿದೆ


ನಾನೀಗ ಉಪ್ಪಿನ ಗೊಂಬೆ
ಅಬ್ಬರದ ಕಡಲು
ಅಪರಂಪಾರ


-೨-
ಕವಿತೆಯ ಬಗೆಗೆ ನನಗೆ
ಸಿಟ್ಟು ಮತ್ತು ಪ್ರೀತಿ


ಪ್ರೀತಿ ಯಾಕೆಂದರೆ ಅದು ನನ್ನಿಂದ
ಏನನ್ನೂ ಬೇಡುವುದಿಲ್ಲ
ಮುದ್ದು ಬೆಕ್ಕಿನಂತೆ ಬೆಚ್ಚಗೆ ಜತೆಗಿರುತ್ತದೆ


ಸಿಟ್ಟು ಯಾಕೆಂದರೆ ಅದು ನನ್ನ
ದುಃಖವ ದೂರ ಮಾಡುವುದಿಲ್ಲ
ಅತೃಪ್ತಿಯ ನೋವಿಗೆ
ಅರಿವಿನ ಉಪ್ಪು ಸೇರಿಸುತ್ತದೆ


ಮಾತು ಎಲ್ಲವ ಬಚ್ಚಿಡುತ್ತದೆ
ಕವಿತೆ ಹೇಳಿಯೂ ಉಳಿಸುತ್ತದೆ


~ಹರೀಶ್ ಕೇರ

1 comment:

Anonymous said...

Thanks apara.
ee kavithegalu, ee kathegalu
ee aksharagalu, ee dhukkagalu,
ee sneha, ee moha
ee naraka, ee pulaka !
- Harish kera